ಜಯತೀರ್ಥ ಬಿವಿ (ಜನನ ಮೇ ೮, ೧೯೭೭) ಒಬ್ಬ ಭಾರತೀಯ ರಂಗಭೂಮಿ ಕಾರ್ಯಕರ್ತ, ನಿರ್ಮಾಣ ವಿನ್ಯಾಸಕ ಮತ್ತು ಫಿಲ್ಮ್ ಮೇಕರ್. ಅವರು ಒಲವೇ ಮಂದಾರ, ಟೋನಿ, ಬ್ಯೂಟಿಫುಲ್ ಮನಸುಗಳು ಮತ್ತು ಬೆಲ್ ಬಾಟಮ್ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ನಿರ್ದೇಶಕ ಮತ್ತು ನಾಟಕ ಬರಹಗಾರರಾಗಿ ಅವರ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. == ಆರಂಭಿಕ ಜೀವನ == ಜಯತೀರ್ಥ ಕರ್ನಾಟಕದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಹಣಕಾಸಿನ ಅಡಚಣೆಯಿಂದಾಗಿ ಪ್ರೌಢಶಾಲೆಯನ್ನು ತೊರೆದ ಅವರು ೧೭ ನೇ ವಯಸ್ಸಿನಲ್ಲಿ ಮಾರಾಟಗಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಅವರು ಹೆಸರಾಂತ ರಂಗಕರ್ಮಿ ಎ ಎಸ್ ಮೂರ್ತಿ ಅವರ ಅಡಿಯಲ್ಲಿ ಅಭಿನಯತರಂಗದಲ್ಲಿ ತರಬೇತಿ ಪಡೆದರು ಮತ್ತು ನಂತರ ಅದೇ ಸಂಸ್ಥೆಯಲ್ಲಿ ಶಿಕ್ಷಕರಾದರು. ಜಯತೀರ್ಥ ಅವರು ರಂಗಭೂಮಿಯಲ್ಲಿನ ಅವರ ಕಾರ್ಯಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದರು. == ಚಲನಚಿತ್ರ ವೃತ್ತಿಜೀವನ == ೨೦೦೭ರಲ್ಲಿ ಅವರು ಹಸಿವು ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು. ಇದು ಪ್ಯಾರಿಸ್‌ನ ಸಿನಿರೈಲ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಕಿರುಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ೨೦೧೧ ರಲ್ಲಿ, ಅವರು ಪೂರ್ಣ ಪ್ರಮಾಣದ ಕನ್ನಡ ಚಲನಚಿತ್ರ ಒಲವೇ ಮಂದಾರ ನಿರ್ದೇಶಿಸಿದರು. ಇದು ೫೯ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು (ಅತ್ಯುತ್ತಮ ನಿರ್ದೇಶಕ) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಂದಿತು. ಒಲವೇ ಮಂದಾರದ ಉಪ ಕಥಾವಸ್ತುವು ತನ್ನ ಹೆಂಡತಿಯ ನೆನಪಿಗಾಗಿ ರಸ್ತೆ ನಿರ್ಮಿಸಲು ೨೨ ವರ್ಷಗಳ ಕಾಲ ಕಲ್ಲಿನ ಬೆಟ್ಟವನ್ನು ಕತ್ತರಿಸಿದ ದಶರತ್ ಮಾಂಝಿ ಅವರ ನಿಜ ಜೀವನದ ಘಟನೆಗಳಿಂದ ಪ್ರೇರಿತವಾಗಿದೆ. ನಂತರ ಅವರು ಟೋನಿ (೨೦೧೩) ಅನ್ನು ನಿರ್ದೇಶಿಸಿದರು, ಇದು ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. ಬುಲೆಟ್ ಬಸ್ಯಾ (೨೦೧೫) ಕನ್ನಡ ಹಾಸ್ಯ ಮನರಂಜನಾತ್ಮಕ ಚಿತ್ರವಾಗಿತ್ತು. ಬ್ಯೂಟಿಫುಲ್ ಮನಸುಗಳು (೨೦೧೭), ಇವರ ಮತ್ತೊಂದು ಯಶಸ್ವಿ ಚಲನಚಿತ್ರವಾಗಿದ್ದು, ೨೦೧೨ ರಲ್ಲಿ ಜನರನ್ನು ಬೆಚ್ಚಿಬೀಳಿಸಿದ ನೈಜ ಘಟನೆಗಳನ್ನು ಆಧರಿಸಿದೆ. ಈ ಚಲನಚಿತ್ರವು ಟೈಮ್ಸ್ ಆಫ್ ಇಂಡಿಯಾ ೨೦೧೭ ರಲ್ಲಿ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದು ಕನ್ನಡ ಚಿತ್ರರಂಗದಲ್ಲಿ ತಂತ್ರಜ್ಞರಿಗೆ ನೀಡುವ ಏಕೈಕ ಪ್ರಶಸ್ತಿಯಾಗಿದೆ. ವೆನಿಲ್ಲಾ (೨೦೧೮) ಸಾಮಾಜಿಕ ಕಳಕಳಿಯ ಸಂದೇಶವನ್ನು ಹೊಂದಿರುವ ಮರ್ಡರ್ ಮಿಸ್ಟ್ರಿ ಚಲನಚಿತ್ರ . ಬೆಲ್ ಬಾಟಮ್ (೨೦೧೯) ಒಂದು ಹಾಸ್ಯ ಕ್ರೈಮ್ ಥ್ರಿಲ್ಲರ್, ಪತ್ತೇದಾರಿ ಕಥೆಗಳ ತೀವ್ರ ಅಭಿಮಾನಿಯ ಕಥೆ. ಇದು ೨೦೧೯ ರಲ್ಲಿ ೧೦೦ ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಿತ್ರವಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ೨೦೨೦ ರಲ್ಲಿ ಇದು ಎರಡನೇ ಅತ್ಯುತ್ತಮ ವಾಣಿಜ್ಯ ಚಲನಚಿತ್ರ ಮನ್ನಣೆಯನ್ನೂ ಗೆದ್ದುಕೊಂಡಿತು ಈ ಚಲನಚಿತ್ರವು ೨೦೨೦ ರ ಕ್ರಿಟಿಕ್ಸ್ ಚಾಯ್ಸ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದೆ. ನವೆಂಬರ್ ೨೦೨೦ ರಲ್ಲಿ, ಜಯತೀರ್ಥ ಅವರು ಕನ್ನಡ ಚಿತ್ರರಂಗದ ಇತರ ನಾಲ್ವರು ನಿರ್ದೇಶಕರಾದ ಕೆಎಂ ಚೈತನ್ಯ, ಶಶಾಂಕ್, ಯೋಗರಾಜ್ ಭಟ್ ಮತ್ತು ಪವನ್ ಕುಮಾರ್ ಜೊತೆಗೂಡಿ ೨-ಗಂಟೆಗಳ ಚಲನಚಿತ್ರವನ್ನು ನಿರ್ಮಿಸಿದರು. ಜನವರಿ ೨೦೨೧ ರಲ್ಲಿ , ಬ್ಲಾಕ್‌ಬಸ್ಟರ್ ಬೆಲ್ ಬಾಟಮ್‌ನ ಮುಂದಿನ ಭಾಗವಾದ ಬೆಲ್ ಬಾಟಮ್ ೨ ಅನ್ನು ಜಯತೀರ್ಥ ನಿರ್ದೇಶಿಸುವುದಾಗಿ ಘೋಷಿಸಿದರು. == ರಂಗಭೂಮಿ ಚಟುವಟಿಕೆಗಳು == ಜಯತೀರ್ಥ ಅವರು ೧೫೦ ಕ್ಕೂ ಹೆಚ್ಚು ರಂಗಭೂಮಿ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದು, ಜೀವನ ಕೌಶಲ್ಯದಂತಹ ವಿಷಯಗಳನ್ನು ಕೇಂದ್ರೀಕರಿಸಿದ್ದಾರೆ. ಅವರು ೧೯೯೬ ರಿಂದ ೨೦೦೭ ರವರೆಗೆ ೬೫ ಬೀದಿ ನಾಟಕಗಳು ಮತ್ತು ಹತ್ತು ರಂಗ ನಾಟಕಗಳನ್ನು ಬರೆದು, ನಿರ್ದೇಶಿಸಿದ್ದಾರೆ. ಅನಕ್ಷರಸ್ಥರು ಮತ್ತು ಹಿಂದುಳಿದ ವರ್ಗಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಅವರು ಆ ನಾಟಕಗಳನ್ನು ಆಯೋಜಿಸಿದರು. ಜಯತೀರ್ಥ ಅವರು ಅಲ್-ಅಮೀನ್ ಶಾಲಾ ಕಟ್ಟಡದಲ್ಲಿ ೫೦೦ ನಟರನ್ನು ಒಳಗೊಂಡ ಹಾಥಿಮ್ ಥಿ ಎಂಬ ಪ್ರಯೋಗವನ್ನು ನಿರ್ದೇಶಿಸಿದರು. ಜಯತೀರ್ಥರು ಸಾಮಾಜಿಕ ಸಮಸ್ಯೆಗಳ ಬಗ್ಗೆ ತಾತ್ವಿಕ ಸಂದೇಶಗಳನ್ನು ರವಾನಿಸಲು ಬೀದಿ ನಾಟಕಗಳನ್ನು ಪರಿಣಾಮಕಾರಿ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ, ಮನರಂಜನೆಯ ಹರಿವಿನಿಂದ ತುಂಬಿದ್ದಾರೆ. ನಾಟಕಗಳ ಹರಿವಿನಲ್ಲಿ ಪ್ರೇಕ್ಷಕರು ಒಳಗೊಳ್ಳುವಂತೆ ಮಾಡುವುದು ಅವರ ವಿಧಾನ. ಅವರು ಆರು ರಂಗ ನಾಟಕಗಳು ಮತ್ತು ೬೯ ಬೀದಿ ನಾಟಕ-ಪ್ರದರ್ಶನಗಳನ್ನು ರಚಿಸಿದ್ದಾರೆ. == ನಿರ್ದೇಶಿಸಿದ ಚಲನಚಿತ್ರಗಳು == == ಪ್ರಶಸ್ತಿಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == .